ಬೆಂಗಳೂರಿನಲ್ಲಿ ಬೆಳ್ಳಂ ಬೆಳ್ಳಗ್ಗೆ ಐಟಿ ದಾಳಿ ನಡೆದಿದೆ. ನಗರದ 15 ಕಡೆ ಐಟಿ ರೇಡ್ ನಡೆದಿದ್ದು, ಉದ್ಯಮಿಗಳು ಹಾಗೂ ಜ್ಯುವೆಲರಿ ಶಾಪ್ ಮೇಲೆ ಐಟಿ ದಾಳಿಯಾಗಿದೆ. ಸರ್ಜಾಪುರ ಬಳಿಯ ಮುಳ್ಳೂರು , ಆರ್ ಎಂ.ವಿ ಎಕ್ಸ್ಟೆನ್ಷನ್ , ಬಿಇಎಲ್ ಸರ್ಕಲ್ , ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಾಳಿ
ತೆರಿಗೆ ವಂಚಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಮತ್ತಿಕೆರೆ, ಡಾರ್ಲಸ್ಸ್ ಕಾಲೋನಿ ಸೇರಿದಂತೆ ಹಲವೆಡೆ ದಾಳಿಯಾಗಿದೆ. ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಈ ದಾಳಿ ನಡೆದಿದೆ.
ಕಳೆದ ವಾರ ತೆರಿಗೆ ವಂಚಿಸಿದ್ದ ಚಿನ್ನದ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿತ್ತು. ದಾಳಿ ವೇಳೆ ಹಲವಾರು ದಾಖಲಾತಿ ಪತ್ತೆ ಹಿನ್ನೆಲೆ ದಾಳಿ ವೇಳೆ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ ಮತ್ತೆ ಇಂದು ದಾಳಿ ನಡೆದಿದೆ. ಸರ್ಜಾಪುರ ರಸ್ತೆ. ಮಲ್ಲೇಶ್ವರ. ಸದಾಶಿವ ನಗರ ಸೇರಿ ಹಲವಾರು ಕಡೆ ಐಟಿ ದಾಳಿ ನಡೆಸಿದೆ.
ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ಮನೆ ಮೇಲೂ ದಾಳಿ ನಡೆದಿದ್ದು, ಮತ್ತಿಕೆರೆ ಬಳಿ ಇರೋ ಚಂದ್ರಶೇಖರ್ ಮನೆ ಶೋಧ ನಡೆಸಲಾಗುತ್ತಿದೆ. ಆರು ಮಂದಿ ಐಟಿ ಅಧಿಕಾರಿಗಳು ಚಂದ್ರಶೇಖರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ.